Google search engine
HomePOLITICALರಾಜಕೀಯ ಸುದ್ದಿ:

ರಾಜಕೀಯ ಸುದ್ದಿ:

7 ವರ್ಷ ಅಲ್ಲ, 10 ವರ್ಷ ಸಿದ್ದರಾಮಯ್ಯನೇ ಸಿಎಂ! ಎಂಬಿ ಪಾಟೀಲ್ ಭರ್ಜರಿ ಬ್ಯಾಟಿಂಗ್

13feb 2025- ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಸ್ತಾಂತರ ಚರ್ಚೆಯ ನಡುವೆ ಸಿಎಂ ಸಿದ್ದರಾಮಯ್ಯ ಪರವಾಗಿ ಸಚಿವ ಎಂಬಿ ಪಾಟೀಲ್ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. 7 ವರ್ಷ ಅಲ್ಲ, 10 ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಎಂದು ಹೇಳುವ ಮೂಲಕ ಅಧಿಕಾರ ಹಸ್ತಾಂತರ ಚರ್ಚೆಗೆ ತಿರುಗೇಟು ನೀಡಿದ್ದಾರೆ.

7 ವರ್ಷ 7 ತಿಂಗಳುಗಳ ಕಾಲ ದೇವರಾಜ ಅಸರು ಸಿಎಂ ಆಗಿರುವ ದಾಖಲೆಯನ್ನು ಸಿದ್ದರಾಮಯ್ಯ ಮುರಿಯಲಿ ಎಂಬ ಡಾ. ಜಿ ಪರಮೇಶ್ವರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಎಂಬಿ ಪಾಟೀಲ್ ಸಿದ್ದರಾಮಯ್ಯ ಪರವಾಗಿ ಬ್ಯಾಟಿಂಗ್ ಮಾಡಿದರು.

ದೇವರಾಜು ಅರಸು 7ವರ್ಷ 7 ತಿಂಗಳುಗಳ ಕಾಲ ಸಿಎಂ ಆಗಿದ್ದರು. ಸಿದ್ದರಾಮಯ್ಯನವರು ಪೂರ್ಣಾವಧಿ ಇರ್ತಾರೆ. ಏಳು ವರ್ಷಗಳಲ್ಲ 10ವರ್ಷ ಇರ್ತಾರೆ. ಹೈಕಮಾಂಡ್ ಸಿದ್ದರಾಮಯ್ಯನವರನ್ನ ಸಿಎಂ ಮಾಡಿದ್ದಾರೆ ಹಾಗಿರುವಾಗ ಪೂರ್ಣಾವಧಿ ಸಿಎಂ ಆಗಿ ಸಿದ್ದರಾಮಯ್ಯ ಇರ್ತಾರೆ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದರು.ಸದ್ಯ ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ. ಈ ಅವಧಿ ಪೂರೈಸಿ ಮತ್ತೆ ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆ ಎದುರಿಸ್ತೇವೆ. ಮುಂದಿನ ಬಾರಿಯ ನಾವು ಅಧಿಕಾರಕ್ಕೆ‌ ಬರ್ತೇವೆ ಎಂದು ಇದೇ ಸಂದರ್ಭದಲ್ಲಿ ಎಂಬಿ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.ಮೆಟ್ರೋ ದರ ಇಳಿಸಿದ್ರೆ ಜನಸಾಮಾನ್ಯರಿಗೆ ಅನುಕೂಲ ಆಗುತ್ತೆ. ಬೆಂಗಳೂರು ಒತ್ತಡ ಕಡಿಮೆ ಆಗಬೇಕಾದರೆ ಸಬ್ ಅರ್ಬನ್ ರೈಲ್ವೇ, ಫೆರಿಫೆರಲ್ ರಿಂಗ್ ರೋಡ್ ಎಲ್ಲಾ ಆಗಬೇಕು ಎಂದು ಅಭಿಪ್ರಾಯ ಪಟ್ಟರು.ತೇಜಸ್ವಿ ಸೂರ್ಯ ಆರೋಪ ವಿಚಾರವಾಗಿ ಮಾತನಾಡಿ, ಈ ಬಗ್ಗೆ ಕುಳಿತು ಚರ್ಚೆ ಮಾಡಬೇಕು. ಎರಡು ಸರ್ಕಾರ ಜನರ ಮೇಲೆ ಹೊರೆ ಆಗುವ ಕೆಲಸ ಮಾಡಬಾರದು. ನಮ್ಮ ರಾಜ್ಯದ ಭಾಗವನ್ನು ಸಿಎಂ ಹೇಳಿದ್ದಾರೆ. ರಾಜಕಾರಣ ಮಾಡಬೇಕಾದರೆ ಸಿಎಂ ಹೇಳಿದಂತೆ ಅವರು ಮಾಡಲಿ. ಸಿಎಂ ಪತ್ರ ಬರೆದಿಲ್ಲ ಎಂದರೆ ಈಗ ಅಧಿಕೃತವಾಗಿ ಹೇಳಿದ್ದಾರೆ . ನೀವು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಲ್ಲಿ ಹೇಳಬೇಕಿತ್ತು. ರಾಜ್ಯ ಸರ್ಕಾರ ಕಡಿಮೆ ಮಾಡಿದ್ರೆ ನಾವು ಮಾಡ್ತೇವೆ ಎನ್ನಬೇಕಿತ್ತು. ನಿಮ್ಮವರು ಯಾಕಾಗಿ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು.

ಕೆಎನ್ ರಾಜಣ್ಣ v/s ಡಿಕೆಶಿ : ಕಾಂಗ್ರೆಸ್‌ನ ಇಬ್ಬರು ಪ್ರಭಾವಿ ನಾಯಕರ ನಡುವಿನ ವೈಮನಸ್ಸಿಗೆ ಕಾರಣ ಏನು?

ಕಾಂಗ್ರೆಸ್‌ನಲ್ಲಿ ಪ್ರಭಾವಿ ನಾಯಕರಾದ ಡಿಕೆ ಶಿವಕುಮಾರ್ ಹಾಗೂ ಸಚಿವ ಕೆ ಎನ್ ರಾಜಣ್ಣ ನಡುವಿನ ಭಿನ್ನಮತ ಮತ್ತೊಮ್ಮೆ ಬಹಿರಂಗಗೊಂಡಿದೆ. ಇಬ್ಬರು ನಾಯಕರ ನಡುವಿನ ಮುಸುಕಿನ ಗುದ್ದಾಟ ಪದೇ ಪದೇ ಬಹಿರಂಗವಾಗುತ್ತಲೇ ಇದೆ. ಇದೀಗ ಮತ್ತೊಮ್ಮೆ ಅದು ಸಾರ್ವಜನಿಕಗೊಂಡಿದೆ. ಉದಯಗಿರಿ ಗಲಭೆ ಘಟನೆಯ ಕುರಿತಾದ ಹೇಳಿಕೆಗಳು ಉಭಯ ನಾಯಕರ ನಡುವಿನ ವೈಮನಸ್ಸನ್ನು ಬಹಿರಂಗಪಡಿಸಿದೆ.ಡಿಕೆ ಶಿವಕುಮಾರ್ ಹಾಗೂ ಕೆ ಎನ್ ರಾಜಣ್ಣ ನಡುವಿನ ಸಂಘರ್ಷ ಇಂದು ನಿನ್ನೆಯದಲ್ಲ. ಈ ಹಿಂದೆಯೂ ಇದು ಕಾಣಿಸಿಕೊಂಡಿತ್ತು. ಹೆಚ್ಚುವರಿ ಡಿಸಿಎಂ ಚರ್ಚೆಯನ್ನು ಹುಟ್ಟು ಹಾಕಿದ್ದೇ ಕೆ ಎನ್ ರಾಜಣ್ಣ. ಸಿಎಂ ಸಿದ್ದರಾಮಯ್ಯ ಬಣದ ಜೊತೆಗೆ ಗುರುತಿಸಿಕೊಂಡಿದ್ದ ರಾಜಣ್ಣ ಒಬ್ಬರೇ ಡಿಸಿಎಂ ಏಕೆ, ಚುನಾವಣೆಯ ಸಂದರ್ಭದಲ್ಲಿ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಹೆಚ್ಚುವರಿ ಡಿಸಿಎಂ ಅಗತ್ಯ ಇದೆ ಎಂದಿದ್ದರು. ಇದು ಡಿಕೆಶಿಯ ಅಸಮಾಧಾನಕ್ಕೂ ಕಾರಣವಾಗಿತ್ತು.ಡಿಕೆಶಿಯ ಅಸಮಾಧಾನಕ್ಕೆ ಉತ್ತರ ನೀಡುವ ಭರದಲ್ಲಿ ಮಾತನಾಡಿದ್ದ ಕೆ ಎನ್ ರಾಜಣ್ಣ “ಡಿಸಿಎಂ ಡಿ.ಕೆ ಶಿವಕುಮಾರ್ ಬೇಜಾರಾಗಲು ಅವರ ಆಸ್ತಿ ಏನಾದರೂ ಬರೆಸಿಕೊಂಡಿದ್ದೇವಾ? ಇದೆಲ್ಲ ಸುಮ್ಮನೆ ಅಷ್ಟೇ” ಎಂದು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

News Portal | WordPress Portal |
Deneme Bonusu Veren Siteler +1000 TL | 2025 Güncel | Güvenilir bahis siteleri | Ekim 2025 | Güvenilir Slot Siteleri 2025 – Dead or Alive 2 oyna
Trusted Casino Sites | October 2025 Updated | Trusted Betting Sites | October 2025 | Safe Gambling Sites 2025 – Dead or Alive 2 play