ಸ್ವಲ್ಪ ಯಾಮಾರಿದ್ರೆ ಪೊಲೀಸರ ಹೆಣಗಳು ಬೀಳುತ್ತಿದ್ದವು: ಎಫ್ಐಆರ್ನಲ್ಲಿ ಸ್ಫೋಟಕ ಅಂಶ ಉಲ್ಲೇಖ
ಮೈಸೂರಿನ ಉದಯಗಿರಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ಫೆಬ್ರವರಿ 9ರಂದು ರಾತ್ರಿ ನಡೆದಿದ್ದ ಗಲಭೆ ಭಯದ ವಾತಾವರಣ ನಿರ್ಮಿಸಿ ಬಿಟ್ಟಿದೆ.. ಈ ಮಧ್ಯೆ ಕಲ್ಲು ಎಸೆದು ದುಷ್ಕೃತ್ಯ ಮೆರೆದ ಆರೋಪಿಗಳ ಹೆಡೆಮುರಿ ಕಟ್ಟಲಾಗಿದೆ. ಗಲಭೆಯಲ್ಲಿ 1 ಸಾವಿರಕ್ಕೂ ಹೆಚ್ಚು ಜನ ಇದ್ದರು ಎಂದು ಪೊಲೀಸರು ತಿಳಿಸಿದ್ದು, ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಸಂಬಂಧ ಈಗಾಗಲೇ ಬಂಧಿತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಇನ್ನು ಸ್ವಲ್ಪ ಯಾಮಾರಿದ್ದರೂ ಪೊಲೀಸರ ಹೆಣಗಳು ಬೀಳುತ್ತಿದ್ದವು ಎಂದು ಎಫ್ಐಆರ್ನಲ್ಲಿ ಉಲ್ಲೆಖವಾಗಿದೆ.ಅಕ್ರಮವಾಗಿ ಗುಂಪು ಕಟ್ಟಿಕೊಂಡು ಸರ್ಕಾರದ ಆಸ್ತಿ ಪಾಸ್ತಿಗೆ ಹಾನಿ, ಪೊಲೀಸ್ ಇಲಾಖೆಗೆ ಸಂಬಂದಿಸಿದ ವಾಹನಗಳಿಗೆ ಹಾನಿ, ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿ ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ಮಾಡಿದ್ದಾರೆ. ಇದರಿಂದ ಪೊಲೀಸರ ಸಾವು ಸಂಭವಿಸಬಹುದು ಎಂದು ತಿಳಿದು ಕಲ್ಲು ತೂರಾಟ ಮಾಡಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಮುಸ್ಲಿಂ ಯುವಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಉದಯಗಿರಿ ಪೊಲೀಸ್ ಠಾಣಾ ಪಿಎಸ್ಐ ಸುನೀಲ್ ಸಿ.ಎನ್ ಅವರು ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಮೂವರು ಶಾಲಾ ಬಾಲಕಿಯರ ಮೇಲೆ ರೇ* – ಶಿಕ್ಷಕನಿಗೆ ಜೀವಾವಧಿ ಶಿಕ್ಷೆ


ಮೂವರು ಶಾಲಾ ಬಾಲಕಿಯರ ಮೇಲೆ ರೇ* – ಶಿಕ್ಷಕನಿಗೆ ಜೀವಾವಧಿ ಶಿಕ್ಷೆ

ಮೂವರು ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಶಿಕ್ಷಕನೊಬ್ಬನಿಗೆ ಸಿಬಿಐ ವಿಶೇಷ ನ್ಯಾಯಾಲಯವು ನಿನ್ನೆ ಜೀವಾವಧಿ ಶಿಕ್ಷೆ ಮತ್ತು 7 ಲಕ್ಷ ದಂಡ ವಿಧಿಸಿದೆ.
2014 ರಲ್ಲಿ ರಾಜ್ಕೋಟ್ನಲ್ಲಿ ಅಪ್ರಾಪ್ತ ವಯಸ್ಕಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ವಿಚಾರಣಾ ನ್ಯಾಯಾಲಯವು 52 ವರ್ಷದ ಶಿಕ್ಷಕ ಧವಲ್ ತ್ರಿವೇದಿಗೆ ಪೋಕ್ಸೋ ಕಾಯ್ದೆಯಡಿ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಈ ಶಿಕ್ಷೆಯಿಂದ ಪೆರೋಲ್ ಪಡೆದ ನಂತರ, ಅವನು ಜೈಲಿನಿಂದ ಹೊರಬಂದು ಚೋಟಿಲಾದಲ್ಲಿ ಇಂಗ್ಲಿಷ್ ಟ್ಯೂಷನ್ ಅನ್ನು ಪ್ರಾರಂಭಿಸಿದನು. ಅಲ್ಲಿ ಆತ ಮತ್ತೊಬ್ಬ ಬಾಲಕಿ ಪ್ರೀತಿಸುವುದಾಗಿ ಹೇಳಿ ತನ್ನ ಬಲೆಗೆ ಬೀಳಿಸಿದ್ದನು. ಆಗಸ್ಟ್ 2018 ರಲ್ಲಿ ಇಬ್ಬರೂ ಓಡಿಹೋಗಿದ್ದರು. ಇತ್ತ ಬಾಲಕಿಯ ತಂದೆ ಗುಜರಾತ್ ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಸಲ್ಲಿಸಿದ ನಂತರ, ಹೈಕೋರ್ಟ್ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿತು.
ವರದಿಗಳ ಪ್ರಕಾರ, ಪರಾರಿಯಾಗಿದ್ದ ತ್ರಿವೇದಿ ನಂತರ ಹರಿದ್ವಾರ ಬಳಿಯ ಗೈಡಿಯಲ್ಲಿ ಸುಳ್ಳು ಗುರುತಿನ ಮೇಲೆ ವೈದ್ಯಕೀಯ ಅಂಗಡಿ ನಡೆಸುತ್ತಿದ್ದರು. ಇನ್ನು 2020 ರ ಮಾರ್ಚ್ನಲ್ಲಿ ಬಾಲಕಿ ಜೊತೆಗಿನ ಜಗಳದ ನಂತರ, ಅವಳು ತ್ರಿವೇದಿಯ ನಿಜವಾದ ಗುರುತನ್ನು ಮನೆಮಾಲೀಕರಿಗೆ ಬಹಿರಂಗಪಡಿಸಿದಳು. ಇದರಿಂದಾಗಿ ಅವನು ಪರಾರಿಯಾಗಬೇಕಾಯಿತು. ಬಾಲಕಿಯಿಂದ ತ್ರಿವೇದಿಯ ಬಗ್ಗೆ ಸುಳಿವು ಪಡೆದ ನಂತರ ಸಿಬಿಐ ಅಂತಿಮವಾಗಿ 2020 ರಲ್ಲಿ ಅವನನ್ನು ಬಂಧಿಸಿತು. ಆರೋಪಿಯ ವಿರುದ್ಧದ ಅಪರಾಧ ಸಾಬೀತಾಗಿದೆ ಎಂದು ನ್ಯಾಯಾಲಯ ಗಮನಿಸಿದೆ. ಅಂತಹ ಅಪರಾಧವನ್ನು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದೆ.ವಿಶೇಷ ವಕೀಲ ವರುಣ್ ತ್ರಿವೇದಿ ಅವರು 27 ಸಾಕ್ಷಿಗಳು ಮತ್ತು 69 ದಾಖಲೆಗಳನ್ನು ಹಾಜರುಪಡಿಸಿದರು. ಆರೋಪಿಯು ಈ ಹಿಂದೆ ರಾಜ್ಕೋಟ್ನಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ಎಂದು ಹೇಳಿದರು. ರಾಜ್ಕೋಟ್ನಿಂದ ಪೆರೋಲ್ ಪಡೆದ ನಂತರ, ಚೋಟಿಲಾದ ಬಾಲಕಿಯನ್ನು ಬಲೆಗೆ ಬೀಳಿಸಿ, ಆಕೆಯ ಮೇಲೆ ಅತ್ಯಾಚಾರ ಮಾಡಿ, ಗರ್ಭಿಣಿಯಾಗುವಂತೆ ಮಾಡಿದರು ಎಂದು ಸಾಬೀತಾಯಿತು.


